ಕಳೆದು ಹೋದೆಯಲ್ಲೇ

ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ
ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ
ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು
ಗರಿಗರಿಯಾದ ಸೀರೆಯುಟ್ಟು
ನನ್ನ ಮನೆಗೆ ಬಂದಿದ್ದೆಯಲ್ಲೆ
ಲಕ್ಷ್ಮೀ ಕಳೆದು ಹೋದೆಯೆಲ್ಲೆ…

ಮೊನ್ನೆ ರಾಜ್ಯೋತ್ಸವದಂದು ನಿನಗೂ
ಭುವನೇಶ್ವರಿಗೂ ಒಂದೇ sweet ಮಾಡಿದ್ದೆ
ಅದಕ್ಕೇನಾದರೂ ಸಿಟ್ಟುಮಾಡಿಕೊಂಡೆಯೋ!
ಕಳ್ಳರ ಕಾಟ ಜಾಸ್ತಿ ಎಂದು ಒಂದೆಳೆ
ಸರದ ಮೇಲೆಯೇ ನಿನ್ನ ಪೂಜಿಸಿದ್ದೆ
ಅದಕ್ಕೇನಾದರೂ ಬೇಸರ ಪಟ್ಟುಕೊಂಡೆಯೋ!
ಎಲ್ಲವೂ ನಿನ್ನದೇ ಅಂದೆ
ಸ್ವಲ್ಪ ನಿರ್ಲಕ್ಷಿಸಿದ್ದೇನೋ ನಿಜ
ಆದರೆ ಇಂದು ಒಮ್ಮಿಂದೊಮ್ಮೆಲೆ
ನನ್ನ ಮರೆತು Megesticನಲ್ಲಿ ಇಳಿದು ಬಿಡುವುದೇ
ಲಕ್ಷ್ಮೀ ಕಳೆದುಹೋದೆಯಲ್ಲೆ…..

ನೀನು ಅದೆಷ್ಟು ಚೆಂದ ಅಂದ ಆಕರ್ಷನೀಯಳು
ಆಘಾತವಾಗದಂತೆ ಕಾಯುತ್ತಲೇ ಇದ್ದೆ
ನೀನು ಹೀಽಗೆ ತುಂಬಾ ಚಂಚಲಿ
ನೀನು ನಿನ್ನ ಹಾಗೆಯೇ,
ನಿನ್ನ ಕಳೆದುಕೊಂಡ ನನ್ನ ಮನ ಮೌನವಾಯಿತು
ಬೆವರು ಬೆನ್ನಕಾವಲಿಗೆ ಇಳಿಯಿತು
ಗೊತ್ತಾಗಲೇ ಇಲ್ಲ ನೋಡು ನನಗೆ ನೀನು
ಇದ್ದಕ್ಕಿದ್ದ ಹಾಗೆ ಒಮ್ಮೆಲೇ ತಪ್ಪಿಸಿಕೊಳ್ಳುವಿಯೆಂದು
ಒಂದಿಷ್ಟೇನಾದರೂ ಸಂಶಯ ಬಂದಿದ್ದರೆ
ಕೈಯಲ್ಲಿ ಕೈ ಹಿಡಿದು ನಡೆಯುತ್ತಿದ್ದೆ
ಲಕ್ಷ್ಮೀ ಕಳೆದುಹೋದೆಯಲ್ಲೆ….
ಪ್ರವಾಸಿಗರೇ ತುಂಬಿದ Megesticನಲ್ಲಿ
ಕಳ್ಳರ ಹಾವಳಿಗೆ ತುತ್ತಾಗಿ ದಿನ ದಿನವೂ
ಮೌಲ್ಯವೇ ಕಳೆದುಕೊಳ್ಳುತ್ತಿರುವೆಯಲ್ಲೆ….
ಹಾಯಾಗಿ ಬದುಕಲೂ ಬಿಡದ ಬೆಂಗಳೂರಿನಲ್ಲಿ
ನೀನು ಬದುಕುತ್ತಲೇ ಕಳೆದುಕೊಳ್ಳುತ್ತಿದ್ದಿಯಲ್ಲ
ಬಡವರ ಕನಸಿಗೆ ಕೊಳ್ಳಿ ಇಡುತ್ತಾ
ಸಿರಿಗರವ ಹೊಡೆದವರಲ್ಲೇ ಇರುವೆನೆನುತ
ಕುಡಿತಗಳ ಜನರ ನಡುವೆಯೇ
ಹೊರಳಾಡುತ್ತ ನೆರಳಾಡುತ್ತ
ಬೆಲೆಯೇ ಕಳೆದುಕೊಳ್ಳುತ್ತಿರುವಿಯಲ್ಲ ಲಕ್ಷ್ಮಿ
ಬಾಗಿಲು ತಟ್ಟಿ ಬರುವವಳಲ್ಲ ನೀನು
ಬಾಗಿಲು ಒದ್ದು ಹೋಗುವುದು ಮಾತ್ರ ಗೊತ್ತು
ಅದಕ್ಕೆಂದೇ ನೀನು ಚಂಚಲೆ ಲಕ್ಷ್ಮಿ
ಲಕ್ಷ್ಮಿ ಕಳೆದುಹೋದೆಯಲ್ಲೆ.

(Megesticನಲ್ಲಿ ಇತ್ತೀಚೆಗೆ ಸಾವಿರಾರು ರೂಪಾಯಿ ಕಳೆದುಕೊಂಡಾಗ, ವಾರವಿಡೀ ಆ ಬೇಸರದಲ್ಲಿಯೇ ಇದ್ದಾಗ ಬರದದ್ದು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೈರ್ಯ ಬೇಕು
Next post ಲಿಂಗಮ್ಮನ ವಚನಗಳು – ೩೯

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys